ಅಂದೊಮ್ಮೆ...ಕಾರ್ಗಿಲ್ ಯುದ್ಧದಿದಂಡಿನ ಮಂದಿ ಬಲಿಯಾದಾಗಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ...ಲಾಥೂರ್, ಕಿಲಾರಿಯಲ್ಲಿ,ಕಛ್, ಭುಜ್ನಲ್ಲಿ,ಗುಡುಗುಡುಗಿ ನೆಲನಡುಗಿ,ಮನೆಮುರಿದಾಗಮಿಡಿದ ಕನ್ನಡ ಮನವೇ ...
ನಿನ್ನೆ ...ಸಾಗರದಲೆಗಳು ತಮಿಳು ತೀರದಲಿಮೃತ್ಯು ನರ್ತನ ನಡೆಸಿರಲು,ಧಿಗ್ಗನೆ ನೆರವಿಗೆಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆನಿನ್ನ ರಾಷ್ಟ್ರೀಯ ಭಾವಕ್ಕೆ!ಜಾತಿ ಭಾಷೆ ಮೀರಿದನಿನ್ನ ಉದಾತ್ತತೆಗೆ!!ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ...ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,ಮಲಪ್ರಭೆ, ತುಂಗಭಧ್ರೆ ನುಗ್ಗಿಹುದುನಿನ್ನದೇ ಮನೆಯ ಒಳಗೆ ...ನೆಲ, ಮನೆ, ದನಕರುಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!
ಇಂದು ...ರಾಯಚೂರಾಗಿದೆ ಚೂರು ಚೂರು,ಬಿಜಾಪುರದ ಗುಂಬಜ್ಗಳಲ್ಲಿ ಮಸಣಮೌನ,ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!ಕಮರಿದೆ ಕನಸು, ಮುರುಟಿದೆ ಮನಸುಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ ಬಟ್ಟೆಸೈನ್ಯದ ಜನಕೆ ಹಣ,ಸುನಾಮಿ ಪೀಡಿತರಿಗೆ ಚಪಾತಿ ಅನ್ನ.ನಿನ್ನಯ ಮನೆಯ ಜನಕ್ಕೆ ??ಕಡೆ ಪಕ್ಷ ಒಂದು ಹನಿ ಕಣ್ಣೀರು ?ಮನೆಗೆ ಮಾರಿ ಊರಿಗೆ ಉಪಕಾರಿ
ಇದು ಕನ್ನಡಿಗನ ನಿಜ ರೂಪವೆಂದುಬೆಚ್ಚಿಹಳು ಭುವನೇಶ್ವರಿ ...ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,ಮೈಮನ ತುಂಬಿಹ ನಿರ್ವಿಣ್ಣತೆನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!
ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!
(ಆನಂದ್ - 2005)
(ಆನಂದ್ - 2005)