Friday, April 22, 2011

ಆಕ್ರಂದನ

ಮನದ ಆಳದಿಂದ ಮೇಲಕ್ಕೆದ್ದ ನೋವುಗಳೆಲ್ಲ
ಮುಗಿಲೆತ್ತರಕ್ಕೆ ಜಿಗಿದು, ಬಾನಿನಾಳವ ಸೀಳಿ
ಅಸ್ತಿತ್ವವೇ ಇಲ್ಲದ ದೇವನಲಿ ನ್ಯಾಯಕ್ಕಾಗಿ
ಇಡುವ ಮೊರೆಯೇ ಈ ಆಕ್ರಂದನ II

ಅಪರಿಮಿತ ಮಾನಸಿಕ ಹಿಂಸೆ
ತಾಳದೀ ಜೀವ ವಿರಹದ ಚಿಂತೆ
ಹೇ ದೇವ... ಕೇಳದೇ ನನ್ನೊಡಲ ಆಕ್ರಂದನ
ನಿನ್ನಿಂದಲೂ ಅಸಾಧ್ಯವೆ ನಮ್ಮೀರ್ವರ ಮಿಲನ II

ನೀನಂತೆ ಒಬ್ಬ ನಿಷ್ಕಪಟಿ
ಅಲ್ಲಾ... ನೀ ಖಂಡಿತಾ ನಿಷ್ಕರುಣಿ
ಬೇಡದ ಸಂಬಂಧ ಬೆಸೆದುಬಯಸಿದಾ ಬಂಧ ಬಿರಿದು
ಹಾಲಿನಾ ಸ್ನೇಹಕ್ಕೆ ವಿಷ ಬೆರೆಸುವ ನಿನ್ನ

ಕ್ಷೀರಸಾಗರದಲಿ ಬರೀ ಹಾಲಾಹಲವೆ ತುಂಬಲಿ
ಅದರಲ್ಲೇ ನಿನ್ನ ನಿರ್ನಾಮ ಆಗಲಿ II

(ಆನಂದ್ - 1989)

No comments:

Post a Comment