Thursday, April 21, 2011

ತುಮುಲ






















ಅಳುವೊಮ್ಮೆ ನಗುವೊಮ್ಮೆ
ಭಯದ ಅಲೆಯೊಮ್ಮೆ
ಸೋಲಿನಾ ಸೆಲೆಯೊಮ್ಮೆ
ಈ ಮನದಿ ಮೂಡಿದೆ II

ಕೊಂದವರ ಕೊಲ್ಲಲೇ?
ಹಿನ್ನೆಲೆಯ ತಿಳಿಯಲೇ?
ಚಿತ್ರಹಿಂಸೆ ನೀಡಲೇ?
ಎಂದೇ ತಿಳಿಯದಾಗಿದೆ

ಈ ಹತ್ಯೆ ನ್ಯಾಯಪಾಲನೆಗೋ?
ಅಥವಾ ಕೋಮುಗಲಭೆಗೋ?
ಎಂದೋ ಹಿಂದಿನ ದ್ವೇಶಕ್ಕೋ?
ಹೊಟ್ಟೇಕಿಚ್ಚಿನ ಕೋಪಕ್ಕೋ?

ಅಂತೂ ಈ ವಧೆ, ಕೆಡೆಸಿದೆ ಮನದ ನೆಮ್ಮದಿ
ಇದರೊಡನೆ ದೇಶದ
ಸುವರ್ಣಯುಗದ
ಆರಂಭವೋ? ಅವನತಿಯೋ? ಕಾಣೆ

ಇದರಿಂದ ಕೆಲವರಿಗೆ ಆನಂದ
ದೇಶದ ಸುಧೀರರಿಗೆಲ್ಲಾ ಅಪಮಾನದ ಬಂಧ
ಸಿಖ್ - ಭಾರತ ಸಂಬಂಧ
ಮುಗಿಯದಿರಲಿ ಆ ಅನುಬಂಧ

(ಆನಂದ್ - 31.10.1984 - ಇಂದಿರಾ ಗಾಂಧೀ ಕೊಲೆಯಾದ ಸುದ್ದಿ ತಿಳಿದ ಕ್ಷಣದಲ್ಲಿ @ 11.30 AM)

No comments:

Post a Comment