Thursday, April 21, 2011

ಗೊಂದಲ






















ಮನಕೆ ಭ್ರಾಂತಿ ತಟ್ಟಿತೋ
ಅಚ್ಚರಿಯ ಅಲೆಯುಕ್ಕಿತೋ
ಭಾರತದ ಬೆನ್ನೆಲುಬು ಮುರಿಯಿತೋ
ಇಂದಿರೆಯ ಕೊಲೆಯಾಗಿ ಹೋಯಿತೋ

ಗಡಿಯಲ್ಲಿ ಯುದ್ಧ ಶುರುವಾಯಿತೋ
ಎಲ್ಲಿ ನೋಡಿದರಲ್ಲಿ ಸೈನಿಕನೋ
ಶಾಂತಿ ಸಿಗದ ಬಂಜರು ಭಾರತವೋ
ಆಗುವುದೇ ಪರಜನರ ಪಾಲು
ಇಲ್ಲಾ.. ನಮ್ಮ ಉದಯದ ಕನಸು ಹಾಳೋ?

ಸರ್ವಾಧಿಕಾರಿಯ ಪಾಲು...
ಆದೀತೆ? ಈ ದೇಶ ಹಾಳು
ಅತಿಶೋಕದ ಕಥೆಯಿದುವೆ ಕೇಳು
ಮುಳುಗುತಿಹ ಭಾರತಕೆ
ರಕ್ಷಕರು ಯಾರು? ಮುಂದಾರು?

(ಆನಂದ್ - 31.10.1984 - ಇಂದಿರಾ ಗಾಂಧೀ ಕೊಲೆಯಾದ ಸುದ್ದಿ ತಿಳಿದ ಕ್ಷಣದಲ್ಲಿ @ 11.30 AM)

No comments:

Post a Comment